Part 5 - ಗರ್ಭಿಣಿಯರು ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬಾರದು? ಏಕೆ? - ಡಾ. ಶಿವಮೂರ್ತಿ ಎನ್ - Medication in Pregnancy - Kannada - Dr Shiva Murthy N Titelbild

Part 5 - ಗರ್ಭಿಣಿಯರು ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬಾರದು? ಏಕೆ? - ಡಾ. ಶಿವಮೂರ್ತಿ ಎನ್ - Medication in Pregnancy - Kannada - Dr Shiva Murthy N

Part 5 - ಗರ್ಭಿಣಿಯರು ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬಾರದು? ಏಕೆ? - ಡಾ. ಶಿವಮೂರ್ತಿ ಎನ್ - Medication in Pregnancy - Kannada - Dr Shiva Murthy N

Jetzt kostenlos hören, ohne Abo

Details anzeigen

Über diesen Titel

Part 5 - ಗರ್ಭಿಣಿಯರು ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು  ತೆಗೆದುಕೊಳ್ಳಬಾರದು? ಏಕೆ? - ಡಾ. ಶಿವಮೂರ್ತಿ ಎನ್ -  Medication in  Pregnancy - Kannada - Dr Shiva Murthy N ಗರ್ಭಿಣಿ ಸ್ತ್ರೀಯರು ಮಾನವನ ಮುಂದಿನ ಪೀಳಿಗೆಯನ್ನು ಸೃಷ್ಟಿ ಮಾಡುವ ಒಂದು ಮಹತ್ವದ  ಕೆಲಸವನ್ನು ಪೂರೈಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಣೆ  ಮಾಡುತ್ತಿರುತ್ತಾರೆ. ಅಂತಹ ಗುರುತರವಾದ ಕೆಲಸವನ್ನು ಅತೀ ನಾಜೂಕಾಗಿ ಮಾಡಬೇಕಾಗುತ್ತದೆ.  ಹಾಗಾಗಿ ಗರ್ಭಿಣಿ ಸ್ತ್ರೀಯರು ಕುಡಿಯುವ ನೀರಿನ ಸ್ವಚ್ಛತೆಯಿಂದ ಹಿಡಿದು, ಅವರು ತಿನ್ನುವ  ಆಹಾರ ಮತ್ತು ಅದರಲ್ಲಿರುವ ಪೋಷಕಾಂಶಗಳು ಹೆಚ್ಚು ಮಹತ್ವ ಪಡೆಯುತ್ತವೆ. ಹಾಗಿದ್ದಾಗ  ಅವರು ರಾಸಾಯನಿಕಗಳಾದ ಔಷಧಿಯನ್ನು ತೆಗೆದು ಕೊಳ್ಳಬಹುದೇ? ಇಲ್ಲವೇ? ಎಂಬುದನ್ನು ತಿಳಿದರೆ  ಒಳ್ಳೆಯದು ಮತ್ತು ಯಾವ ಮಾತ್ರೆ ಅಥವಾ ಔಷಧಿ ತೆಗೆದುಕೊಳ್ಳಬಾರದು ಎಂಬುದರ ಬಗ್ಗೆ  ತಿಳಿದುಕೊಳ್ಳಲೇಬೇಕು. ಬನ್ನಿ ಈ ಬಗ್ಗೆ ಪ್ರಶ್ನಾವಳಿಗಳ ಮೂಲಕ ಅವುಗಳಿಗೆ ಉತ್ತರ  ನೀಡುತ್ತಾ ತಿಳಿದುಕೊಳ್ಳಲು ಪ್ರಯತ್ನ ಮಾಡೋಣ. ಡಾ. ಶಿವಮೂರ್ತಿ ಎನ್, ಔಷಧಶಾಸ್ತ್ರಜ್ಙರು ಡಾ. ಶಿವಮೂರ್ತಿ ಎನ್ ಅವರು, ವೃತ್ತಿಯಲ್ಲಿ ವೈದ್ಯರು ಮತ್ತು ಔಷಧಶಾಸ್ತ್ರಜ್ಙರು.    ತಮ್ಮ ೨೦ ವರ್ಷದ ವೃತ್ತಿ ಜೀವನದಲ್ಲಿ ಹಲವಾರು ಉತ್ತಮ ಸಂಸ್ಥೆಗಳಲ್ಲಿ ಜವ್ವಬ್ದಾರಿಯುತ    ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಔಷಧಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿಯಲ್ಲಿ ರಾಜಿವ್ ಗಾಂಧಿ ವೈಧ್ಯಕೀಯ    ವಿಶ್ವವಿಧ್ಯಾಲಯದಲ್ಲಿ ಮೊದಲ ರಾಂಕ್ ಪಡೆದು ಉತ್ತೀರ್ಣರಾದ ನಂತರ ಸಂತ ಜಾನ್ ವೈದ್ಯಕೀಯ    ಕಾಲೇಜು ಬೆಂಗಳೂರು, ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು, ಪಾಂಡಿಚೆರಿ, ಡಾ. ಮೂಪೆನ್    ವಯನಾಡು ವೈದ್ಯಕೀಯ ಕಾಲೇಜು, ವಯನಾಡು ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ,    ಈಗ, ಡಾ. ಚಂದ್ರಮ್ಮ ದಯಾನಂದ ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರ,    ಬೆಂಗಳೂರು ಇಲ್ಲಿ ಸಹ ಪ್ರಾಧ್ಯಾಪಕರಾಗಿ ಔಷಧಶಾಸ್ತ್ರ ವಿಭಾಗದಲ್ಲಿ ಕೆಲಸ    ಮಾಡುತ್ತಿದ್ದಾರೆ. ಅವರು ಬರೆದು ಹಾಡಿದ ಕ್ಷಯರೋಗ ಮಾಹಿತಿ ಉಳ್ಳ ಜಾನಪದ ಶೈಲಿಯ ಹಾಡಿಗೆ ಕಾಲೇಜು    ಮಟ್ಟದಲ್ಲಿ ಎರಡನೇ ಪ್ರಶಸ್ತಿ ದೊರೆತಿದೆ. ಅವರು ಬರೆದು, ನಿರ್ದೆಶನ ಮಾಡಿದ ಇಂಗ್ಲೀಷ್    ಕಾರ್ಟೂನ್ "ಬ್ರಾಂಡ್-ಅಬ್ಯೂಸ್ - ಎಂಡ್ ದಿ ಮೆನೇಸ್" ಎನ್ನುವ ಚಿತ್ರಕ್ಕೆ ಭಾರತ ಔಷಧ    ನಿಯಂತ್ರಣ ಸಂಸ್ಥೆಯ ಎನ್.ಸಿ.ಸಿ-ಐ.ಪಿ.ಸಿ ಅಂಗ ಸಂಸ್ಥೆಯಿಂದ ರಾಷ್ಟ್ರ ಮಟ್ಟದ ಮೊದಲ    ಪ್ರಶಸ್ತಿ ದೊರೆತಿದೆ. ಅವರು ಮಂಡಿಸಿದ "ಮಕ್ಕಳಲ್ಲಿ ಔಷಧಗಳಿಂದಾಗುವ ಅಡ್ಡಪರಿಣಾಮಗಳು"    ವಿಷಯದ ಸಂಶೋಧನಾ ಪತ್ರಕ್ಕೆ ಚೆನ್ನೈನ ಬಾಲಾಜಿ ಮೆಡಿಕಲ್ ಕಾಲೇಜು ಆಯೋಜಿಸಿದ್ದ    “ಹೈಪರ್ಪಿಯೇಸಿಯಾ-೨೦೨೧” ಸಮ್ಮೇಳನದಲ್ಲಿ ಎರಡನೇ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ. ಮೇಲೆ ಹೇಳಿದ ...
Noch keine Rezensionen vorhanden